ಮಗನನ್ನು ವಸತಿ ಶಾಲೆಗೆ ಬಿಟ್ಟು ತಂದೆ ಹಿಂತಿರುಗಿದ ಅರ್ಧ ಗಂಟೆಯಲ್ಲೇ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ | ಜನತಾ ನ್ಯೂಸ್
ಹಾಸನ : ಮಗನನ್ನು ವಸತಿ ಶಾಲೆಗೆ ಬಿಟ್ಟು ತಂದೆ ಹಿಂತಿರುಗಿದ ಅರ್ಧ ಗಂಟೆಯಲ್ಲೇ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಳೆನರಸೀಪುರ ತಾಲೂಕಿನ ಸುಣ್ಣಕಲ್ನ ಹೊಸೂರು ಗ್ರಾಮದಲ್ಲಿ ನಡೆದಿದೆ.
ಕಿರಣ್ ಅರಕಲಗೂಡು ತಾಲೂಕಿನ ರಾಮನಾಥಪುರ ಹೋಬಳಿಯ ಬೆಳಗುಲಿ ಗ್ರಾಮದ ಕಿರಣ್ (14) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ.
ಇಂದು ಬೆಳಗ್ಗೆ ಗ್ರಾಮದಿಂದ ವಸತಿ ಶಾಲೆಗೆ ಕಿರಣ್ನನ್ನು ತಂದೆ ಶ್ರೀನಿವಾಸ್ ಅವರು ಕರೆತಂದು ಬಿಟ್ಟು ಹೋಗಿದ್ದರು.
ತಂದೆ ಹೋದ ಅರ್ಧ ಗಂಟೆಯಲ್ಲೇ ನೇಣಿಗೆ ಕಿರಣ್ ನೇಣಿಗೆ ಶರಣಾಗಿದ್ದಾನೆ. ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
RELATED TOPICS:
English summary :student committed suicide in Hasan